
ಅಣ್ಣಾವ್ರು ನನ್ನ ಶ್ರದ್ಧೆ ಬಗ್ಗೆ ಒಂದು ಮಾತು ಹೇಳಿದ್ರು
ಮಿಮಿಕ್ರಿ ದಯಾನಂದ ಲೈಫ್ ಸ್ಟೋರಿ ಭಾಗ 2

ಇದುವರೆಗೂ ಅವಕಾಶ ದೊರಕಿಲ್ಲ ಎನ್ನುವ ಹಾಗಿಲ್ಲ. 1980ರಲ್ಲಿ ಬೆಂಗಳೂರಿಗೆ ಬಂದೆ. 83ರಲ್ಲಿ ರಾಜ್ಕುಮಾರ್ ಜೊತೆ ನಟಿಸಿದ್ದೇನೆ. ಗಾಡ್ ಫಾದರ್, ಹಣ, ಆಸ್ತಿ, ಪ್ರಭಾವ ಯಾವುದು ಇರಲಿಲ್ಲ. ಅಣ್ಣಾವ್ರು ಇವರನ್ನು ನೋಡಿ ಕಲಿತುಕೊಳ್ರಿ, ಎಷ್ಟು ಶ್ರದ್ಧೆ ಇದೆ ತಪಸ್ಸಿದು ಎಂದು ಬೇರೆಯವರಿಗೆ ಹೇಳಿದ್ರು.
ನಾನು ಸುಮ್ನೆ ಬಾಗಿಲಲ್ಲಿ ನಿಂತೆ ಅಷ್ಟೇ ಜನರೇ ಇಲ್ಲಿಯವರೆಗೆ ಕರೆತಂದಿದ್ದಾರೆ. ರಾಜ್ಯೋತ್ಸವ, ಗಣಪತಿ ಹಬ್ಬ, ಅಣ್ಣಮ್ಮ ಉತ್ಸವದ ಕಾರ್ಯಕ್ರಮದ ಜೊತೆಗೆ ಆಸ್ಟ್ರೇಲಿಯಾ, ಅಮೆರಿಕಾ, ಸಿಂಗಪುರ, ಕತಾರ್, ನ್ಯೂಜಿಲೆಂಟ್, ದುಬೈ, ಲಂಡನ್... ಹೀಗೆ ಪಾಕಿಸ್ತಾನ, ರಷ್ಯಾ ಬಿಟ್ಟು ಎಲ್ಲಾ ದೇಶಗಳಲ್ಲಿಯೂ ಪ್ರದರ್ಶನ ಕೊಟ್ಟಿದ್ದೇನೆ.
ಮುಂದುವರೆಯುವುದು...